ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಕೇಂದ್ರಗಳಲ್ಲಿ ಬಿಎಎಂಎಸ್ ಹಾಗೂ ಎಂಬಿಬಿಎಸ್ ವೈದ್ಯರ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ಆದರೆ ದಂತವೈದ್ಯರ ಸೇವೆ ಅನೇಕ ವರ್ಷಗಳಿಂದ ಸರಿಯಾಗಿ ದೊರೆಯುತ್ತಿಲ್ಲ. ಬಹಳಷ್ಟು ಯುವ ದಂತವೈದ್ಯರು ನಿರುದ್ಯೋಗಿಗಳಾಗಿದ್ದಾರೆ. ಆರೋಗ್ಯ ಸಚಿವರು ಆರೋಗ್ಯ ಇಲಾಖೆಯಲ್ಲಿ ಗೌರವಧನ ನಿಗದಿಪಡಿಸಿ, ತಾತ್ಕಾಲಿಕವಾಗಿಯಾದರೂ ದಂತವೈದ್ಯ ಪದವೀಧರ
ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಬೇಕು.
- ಎಂ.ಆಂಜನೇಯ,ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.