‘ಆಟದ ಆಸ್ವಾದ ಕಿಮ್ಮತ್ತು ಪಡೆಯಲಿ’ ಎಂಬ ಪ್ರೊ. ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಜೂನ್ 19) ಪ್ರಬುದ್ಧವಾಗಿದೆ. ಭಾರತ– ಪಾಕಿಸ್ತಾನದ ನಡುವೆ ಬಹಳಷ್ಟು ವಿಚಾರಗಳಲ್ಲಿ ವಿವಾದಗಳಿವೆ, ನಿಜ. ಪಾಕಿಸ್ತಾನವು ತನಗೆ ಸಂಬಂಧವಿಲ್ಲದ ಕಾಶ್ಮೀರದ ವಿಚಾರದಲ್ಲಿ ತಲೆಹಾಕಿ, ಧರ್ಮಾಂಧರ ಮೂಲಕ ಭಾರತಕ್ಕೆ ಬಹಳಷ್ಟು ಹಾನಿ ಉಂಟುಮಾಡಿದೆ. ಭಾರತದಿಂದ ಅದಕ್ಕೆ ತಕ್ಕ ಉತ್ತರ ಪಡೆದಿದ್ದರೂ ಇಂತಹ ಕುತ್ಸಿತ ಬುದ್ಧಿಯನ್ನು ಅದು ಬಿಟ್ಟಿಲ್ಲ. ಆದರೆ, ಕ್ರಿಕೆಟ್ ವಿಷಯದಲ್ಲಿ ಇದನ್ನೇ ಬಂಡವಾಳ ಮಾಡಿಕೊಳ್ಳುವ ಹುನ್ನಾರಗಳನ್ನು ವ್ಯಾಪಾರೀ ಮನಸ್ಸುಗಳು ಮಾಡುತ್ತಲೇ ಬಂದಿವೆ. ಕೋಟ್ಯಂತರ ಜನರ ಆಸಕ್ತಿ ಕೆರಳಿಸುವ ಆಟ ಕ್ರಿಕೆಟ್. ಜಾಹೀರಾತು ಜಗತ್ತು ಅದನ್ನು ಬಳಸಿಕೊಳ್ಳದೆ ಸುಮ್ಮನಿರುವುದೇ?
ಚುನಾವಣೆ ಹಾಗೂ ಕ್ರಿಕೆಟ್ ಅನ್ನು ರಾಜಕಾರಣಿಗಳು, ಉದ್ಯಮಿಗಳು ಬಳಸಿಕೊಂಡು ಜನರ ಕಣ್ಣಿಗೆ ಮಣ್ಣೆರಚುವುದು ನಡೆದೇ ಇದೆ. ಎರಡೂ ದೇಶಗಳ ಜನಸಾಮಾನ್ಯರಿಗೆ ಸಂಘರ್ಷ ಬೇಕಿಲ್ಲ. ಆದರೆ ಮೂಲಭೂತವಾದಿಗಳು ಅವರನ್ನು ಸುಮ್ಮನೆ ಇರಗೊಡುವರೇ? ಜನರ ತೆರಿಗೆ ಹಣವು ಶಸ್ತ್ರಾಸ್ತ್ರ ಮಾರುವ ದೇಶಗಳ ಖಜಾನೆ ಸೇರುತ್ತಿದೆ.
–ಆಶಿಹಾಳ ತಿರುಪತಿ,ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.