ADVERTISEMENT

ಕಾಲು ಶತಮಾನ ಕಳೆದರೂ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಸೆಪ್ಟೆಂಬರ್ 2020, 15:33 IST
Last Updated 27 ಸೆಪ್ಟೆಂಬರ್ 2020, 15:33 IST

ಬಡವರಿಗೆ ರಿಯಾಯಿತಿ ದರದಲ್ಲಿ ಮನೆ, ನಿವೇಶನ ಒದಗಿಸಲು ಆಶ್ರಯ, ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ಯೋಜನೆಗಳ ಅಡಿ 483 ಕೋಟಿ ರೂಪಾಯಿಯ ಯೋಜನೆಯನ್ನು ರಾಜ್ಯ ಸರ್ಕಾರ ಇಪ್ಪತ್ತೈದು ವರ್ಷಗಳ ಹಿಂದೆ ಹಮ್ಮಿಕೊಂಡಿದ್ದ ಸುದ್ದಿಯು ‘25 ವರ್ಷಗಳ ಹಿಂದೆ’ ಅಂಕಣದಲ್ಲಿ (ಪ್ರ.ವಾ., ಸೆ. 27) ಪ್ರಕಟವಾಗಿದೆ.

ಅಷ್ಟು ವರ್ಷಗಳ ಹಿಂದೆಯೇ ಇಷ್ಟು ದೊಡ್ಡ ಮೊತ್ತದ ಹಣವನ್ನು ಬಡವರ ವಸತಿಗಾಗಿ ತೆಗೆದಿಟ್ಟಿದ್ದರೂ ಇನ್ನೂ ಎಲ್ಲ ಬಡವರಿಗೆ ಮನೆ ಇಲ್ಲ. ಕಾಲು ಶತಮಾನ ಕಳೆದರೂ ಇಂತಹ ಸ್ಥಿತಿ ಇದೆ ಎಂದರೆ ಆಡಳಿತ ಎತ್ತ ಸಾಗುತ್ತಿದೆ? ವಸತಿಹೀನರಿಗೆ ತಡಮಾಡದೆ ಸೂರು ದೊರಕಿಸಿಕೊಡುವತ್ತ ಸರ್ಕಾರ ಮನಸ್ಸು ಮಾಡಲಿ. ಇಲ್ಲವಾದರೆ ಇದೇ ಸುದ್ದಿ ಮುಂದೆ ‘ಐವತ್ತು ವರ್ಷಗಳ ಹಿಂದೆ’ ಅಂಕಣದಲ್ಲೂ ಪ್ರಕಟವಾದೀತು.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.