ಕಪ್ಪತಗುಡ್ಡ ಚಿನ್ನದ ಮೇಲೆ ‘ಗಣಿ’ ಕಣ್ಣು ವರದಿ ನೋಡಿ (ಪ್ರ.ವಾ., ಸೆ. 25) ಬೇಸರವಾಯಿತು. ವೈವಿಧ್ಯಮಯ ಪ್ರಾಣಿಪಕ್ಷಿಗಳು ಹಾಗೂ ಅಪರೂಪದ ಗಿಡಮೂಲಿಕೆಗಳ ತಾಣವಾಗಿರುವ ಅರಣ್ಯದ ಮೇಲೆ ಗಣಿಗಾರಿಕೆಯ ಕರಿನೆರಳು ಬಿದ್ದಿದೆ. ಸ್ಥಳೀಯರನ್ನು ಮುಂದಿಟ್ಟುಕೊಂಡು ‘ವನ್ಯಜೀವಿ ಧಾಮ’ದ ಸ್ಥಾನಮಾನ ರದ್ದುಗೊಳಿಸುವ ಹುನ್ನಾರವನ್ನು ಪ್ರಭಾವಿಗಳು ನಡೆಸುತ್ತಿದ್ದಾರೆ. ಸಕಾ೯ರ ಯಾವುದೇ ಕಾರಣಕ್ಕೂ ಇಂತಹ ಲಾಬಿಗೆ ಮಣಿಯಬಾರದು.
-ಚೇತನ್ ಆವರಗೊಳ್ಳ,ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.