ಮಂಡ್ಯ ಜಿಲ್ಲೆಯಲ್ಲಿ ಅಕ್ರಮ
ಗಣಿಗಾರಿಕೆಯ ಬಗೆಗೆನಿತ್ಯವೂ
ನಾಯಕರ ಆರೋಪ- ಪ್ರತ್ಯಾರೋಪ,
ಆದರೆ ಬಾನೆತ್ತರದ ಬೆಟ್ಟಗಳು ಮಾತ್ರ
ಕಣ್ಣೆದುರೇ ಕರಗಿಹೋಗುತ್ತಿರುವುದು
ಮಾತ್ರ ನಿಂತಿಲ್ಲ!
ಮನ್ಮುಲ್ ಬಗೆಗೆ ನಾಯಕರಲ್ಲೇ
ವಾದ- ಅಪವಾದ...
ಆದರಿನ್ನೂ ಹಾಲಿಗೆ ನೀರು ಬೆರೆಸುತ್ತಿರುವ
ಯಾರೊಬ್ಬರದೂ ಬಂಧನವಾಗಿಲ್ಲ!
ಕೆಆರ್ಎಸ್ ಅಣೆ ಸುರಕ್ಷತೆ ವಿಚಾರದಲ್ಲಂತೂ
ಶುರುವಾಗಿರುವ ಕೆಸರೆರಚಾಟದ ಗಲಾಟೆಯಲಿ
ಕಟ್ಟೆ ಸುತ್ತಮುತ್ತ ಸಿಡಿಯುತ್ತಿರುವ
ಮದ್ದಿನ ಸದ್ದು ಯಾರಿಗೂ ಕೇಳುತ್ತಲೇ ಇಲ್ಲ!
-ಜೆ.ಬಿ.ಮಂಜುನಾಥ, ಪಾಂಡವಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.