ADVERTISEMENT

ಹೆಸರು ಬದಲಿಸಿದರೆ ಗುಣಮಟ್ಟ ಸುಧಾರಿಸುವುದೇ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 21:07 IST
Last Updated 14 ನವೆಂಬರ್ 2019, 21:07 IST

ಈಗಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಿ, ನಾಡಪ್ರಭು ಕೆಂಪೇಗೌಡರ ಹೆಸರಿಡಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲು ಚಿಂತಿಸಲಾಗಿದೆ ಎಂಬ ಬೆಂಗಳೂರಿನ ಉಪ ಮೇಯರ್‌ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ.

ಯಾವುದೇ ಯೋಜನೆ ಬಡವರ ಪರ ಇದ್ದರೆ, ಅಧಿಕಾರದಲ್ಲಿ ಇರುವವರು ಅದರ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಅದು ಬಿಟ್ಟು, ಹೆಸರು ಬದಲಿಸಿದಾಕ್ಷಣ ಅದರ ಗುಣಮಟ್ಟ ಹೆಚ್ಚಾಗಬಹುದು ಎಂದುಕೊಳ್ಳುವುದು ಮೂರ್ಖತನವಾಗುತ್ತದೆ.

–ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.