ADVERTISEMENT

ಇಂತಹ ಅಪಸವ್ಯಕ್ಕೆ ಕೊನೆಯಿಲ್ಲವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST

ನೌಕರಿ ಕೊಡಿಸುವ ಆಮಿಷವೊಡ್ಡಿ ಒಬ್ಬ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನೈತಿಕವಾಗಿ ಸರಿ. ಸಿ.ಡಿ. ನಕಲಿಯೋ ಅಸಲಿಯೋ ಎನ್ನುವ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ. ಆದರೆ,ಮನುಷ್ಯನ ಸಹಜ ಲೈಂಗಿಕ ವಾಂಛೆಯನ್ನು ನಿಗೂಢವಾಗಿ ಚಿತ್ರೀಕರಿಸುವುದು, ಹಾದಿಬೀದಿಯಲ್ಲಿ ಆಬಾಲವೃದ್ಧರಾದಿಯಾಗಿ ಈ ಕುರಿತು ವಿಕೃತವೆಂಬಂತೆ ಚರ್ಚೆ, ಬಣ್ಣನೆ ಮಾಡುವುದು ಸಿ.ಡಿ. ಒಳಗಿನ ಚಿತ್ರಕ್ಕಿಂತಲೂ ಹೇಯವಾದುದು. ಇದು, ಜನ ಸಿಡಿಮಿಡಿಗೊಳ್ಳುವಷ್ಟು ಅಸಹ್ಯ ಭಾವನೆ ಸೃಷ್ಟಿಸಿದೆ. ಇಂತಹ ಅಪಸವ್ಯಗಳಿಗೆ ಕೊನೆಯಿಲ್ಲವೇ?

- ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT