ADVERTISEMENT

ವಾಚಕರ ವಾಣಿ: ಅನುಕರಣೀಯ ನಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST

ಜಪಾನ್‌ನ ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಜನಾದೇಶಕ್ಕೆ ಆತ್ಮವಿಶ್ವಾಸದಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ. ಇದು, ಇಡೀ ವಿಶ್ವದ ರಾಜಕೀಯ ವಲಯಕ್ಕೆ ಮಾದರಿಯಾದ ನಡೆಯೆಂದೇ ಭಾವಿಸಬಹುದು. ರಾಜಕಾರಣಿಗಳು ಜನಾದೇಶವನ್ನು ಧಿಕ್ಕರಿಸಿ, ಅಧಿಕಾರದ ಆಸೆಗಾಗಿ ವಾಮಮಾರ್ಗದಿಂದ ರಾಜ್ಯಸಭೆ, ವಿಧಾನ ಪರಿಷತ್ತನ್ನು ಪ್ರವೇಶಿಸಲು ಹಪಹಪಿಸುತ್ತಿರುವ ಈ ಹೊತ್ತಿನಲ್ಲಿ ಅಬೆ ಅವರ ನಡೆ ಅನುಕರಣೀಯ. ಅನಾರೋಗ್ಯ ಇರಲಿ ಅಥವಾ ಅನನುಭವವೇ ಇರಲಿ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಅಂತಹವರು ಆತ್ಮವಂಚನೆ ಇಲ್ಲದೆ ವಾಸ್ತವವನ್ನು ಒಪ್ಪಿಕೊಂಡು ರಾಜೀನಾಮೆ ನೀಡುವಂತಹ ಔದಾರ್ಯ ಬೆಳೆಸಿಕೊಂಡರೆ ಎಷ್ಟು ಚೆನ್ನ?

–ಈರಣ್ಣ ಎನ್.ವಿ., ನಾರಾಯಣಪುರ ಪಾಳ್ಯ, ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT