ADVERTISEMENT

ಭೂಗತ ಪಾತಕಿಗಳಿಗೆ ಮನ್ನಣೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST

ಉತ್ತರಪ್ರದೇಶದ ಕಾನ್ಪುರ ಪಟ್ಟಣದ ಅಂಚೆ ಕಚೇರಿಯು ಭೂಗತ ದೊರೆ ಛೋಟಾ ರಾಜನ್ ಮತ್ತು ಹತನಾಗಿರುವ ಭೂಗತ ಪಾತಕಿ ಮುನ್ನಾ ಭಜರಂಗಿ ಅವರ ಭಾವಚಿತ್ರವುಳ್ಳ ಅಂಚೆಚೀಟಿ ಮುದ್ರಿಸಿರುವುದನ್ನು ತಿಳಿದು (ಪ್ರ.ವಾ., ಡಿ. 29) ಅಚ್ಚರಿಯಾಯಿತು. ಅಂಚೆ ಇಲಾಖೆಯು ಇದ್ದುದರಲ್ಲಿ ಪ್ರಾಮಾಣಿಕತೆಗೆ ಹೆಸರಾಗಿದೆ. ಈ ರೀತಿ ಭೂಗತ ಪಾತಕಿಗಳ ಚಿತ್ರವನ್ನು ಅಂಚೆ ಚೀಟಿಯಲ್ಲಿ ಮುದ್ರಿಸುವಂತಹ ಎಡವಟ್ಟು ಹೇಗೆ ಆಯಿತೋ ಅರ್ಥವಾಗುತ್ತಿಲ್ಲ. ಇಲಾಖೆಗೆ ಇದು ಗುಣಪಾಠವಾಗಲಿ. ಮುಂದೆ ಇಂತಹ ಎಡವಟ್ಟುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾದುದು ಅಗತ್ಯ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT