ರಮೇಶ ಜಾರಕಿಹೊಳಿ ಅವರು ಲೈಂಗಿಕ ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಸ್ವಾಗತಾರ್ಹ. ಆದರೆ, ಅವರು ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನು ಅವರ ಕುಟುಂಬದ ಸದಸ್ಯರಿಗೆ ಅಥವಾ ಅವರಿಗೆ ಆಪ್ತರಾಗಿ ಇರುವವರಿಗೇ ನೀಡಬೇಕೆಂಬ ಮತ್ತು ಆರೋಪಮುಕ್ತರಾದೊಡನೆ ಪುನಃ ಅದೇ ಖಾತೆಯನ್ನು ಅವರಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ.
ಇದು ನಿಜವೇ ಆಗಿದ್ದರೆ ಆಶ್ಚರ್ಯಕರ. ಸರ್ಕಾರದ ಜವಾಬ್ದಾರಿಗಳು, ಖಾತೆಗಳು ರಾಜ್ಯದ ಜನರ ಒಳಿತಿಗಾಗಿ ಇರುತ್ತವೇ ಹೊರತು ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಅಲ್ಲ. ಖಾತೆಗಳನ್ನು ಬಸ್ಸಿನಲ್ಲಿ ಸೀಟು ಹಿಡಿಯಲು ಹಾಕುವ ಕರವಸ್ತ್ರದಂತೆ ಬಳಕೆ ಮಾಡಿಕೊಳ್ಳದೆ, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ಅಧಿಕಾರವನ್ನು ದಕ್ಷತೆ, ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಹಂಚಿಕೆ ಮಾಡಬೇಕು.
–ಮಹಾಂತೇಶ ಮಾಗನೂರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.