ಶಾಸಕ ಸ್ಥಾನಕ್ಕೆ ಸ್ವಾರ್ಥ ಪ್ರಯೋಜನಗಳಿಗಾಗಿ ರಾಜೀನಾಮೆ ನೀಡಿ ಉಪಚುನಾವಣೆಗಳನ್ನು ಜನರ ಮೇಲೆ ಹೇರುವುದು ಅಕ್ಷಮ್ಯ. ನಮ್ಮ ಬಹುಪಾಲು ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷದ ಬಿ ಫಾರಂ ಪಡೆದು ಸ್ಪರ್ಧಿಸಿ, ಗೆದ್ದು ಬಂದಿರುತ್ತಾರೆ. ಅವರು ಆ ಪಕ್ಷಕ್ಕೆ ಮತ್ತು ಮತದಾರರಿಗೆ ಜವಾಬ್ದಾರಿಯಾಗಿರುತ್ತಾರೆ. ಅವಧಿಗೂ ಮೊದಲೇ ಮತದಾರರ ಮನ್ನಣೆಯನ್ನು ಧಿಕ್ಕರಿಸಿ, ಪಕ್ಷಕ್ಕೆ ದ್ರೋಹ ಮಾಡುವುದು ಎಷ್ಟು ಸರಿ?
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನೂ ಬಿಗಿಯಾಗಿಸಬೇಕಾಗಿದೆ. ಒಂದು ಪಕ್ಷದ ಬಿ ಫಾರಂ ಪಡೆದು ಆಯ್ಕೆಯಾಗುವ ಶಾಸಕ, ಕೊನೇಪಕ್ಷ ಆ ಅವಧಿ ಪೂರ್ಣಗೊಳ್ಳುವವರೆಗಾದರೂ ಅದೇ ಪಕ್ಷದಲ್ಲಿ ಇರಬೇಕು. ರಾಜೀನಾಮೆ ನೀಡಲೇಬೇಕಾದ ಸ್ಥಿತಿ ಇದ್ದರೆ, ಅದಕ್ಕೆ ಅವಕಾಶ ನೀಡಬಹುದಾದರೂ ಬೇರೆ ಪಕ್ಷಕ್ಕೆ ಸೇರಲು ಅವಕಾಶ ಇರಬಾರದು. ಇಂತಹ ಮೂಗುದಾರ ಹಾಕದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ.
-ವಿ.ಎನ್. ಶ್ರೀನಿವಾಸಮೂರ್ತಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.