ಔದ್ಯೋಗಿಕವಾಗಿ ಪ್ರಗತಿ ಸಾಧಿಸಿರುವ ಜಪಾನ್ನಂಥ ರಾಷ್ಟ್ರಗಳು ಪ್ರಕೃತಿ ವಿಕೋಪದಂಥ ಸಂದರ್ಭ ಎದುರಾದಾಗ ಬೇರೆ ರಾಷ್ಟ್ರಗಳ ಸಹಾಯ ಯಾಚಿಸದೆ ತಾವೇ ತಮ್ಮ ದೇಶವನ್ನು ಪುನರ್ ನಿರ್ಮಿಸಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ.
ಈಗ ನಮ್ಮ ರಾಜ್ಯದ ಕೊಡಗಿನ ಮಹಿಳೆಯರು, ನಾವು ಅವರಿಗೇನೂ ಕಡಿಮೆಯಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ (‘ನೋವ ಮರೆತು ಸ್ವಾವಲಂಬನೆಯತ್ತ ಹೆಜ್ಜೆ’, ಪ್ರ.ವಾ., ನ. 13). ಪ್ರತಿಯೊಂದಕ್ಕೂ ಸರ್ಕಾರವನ್ನು ಅಂಗಲಾಚುವುದಕ್ಕೆ ಬದಲಾಗಿ, ತಾವಾಗಿಯೇ ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ‘ಭಲೇ’ ಅನ್ನಿಸಿಕೊಂಡಿದ್ದಾರೆ. ಅಸಹಾಯಕತೆಯಿಂದ ಕೈಕಟ್ಟಿ ಕುಳಿತುಕೊಳ್ಳುವ ಬದಲು, ಇಂಥ ಸಮಾಜಮುಖಿ ಬದುಕು ಕಟ್ಟಿಕೊಳ್ಳುವಲ್ಲಿ ಇವರ ಶ್ರಮ ಶ್ಲಾಘನೀಯ ಹಾಗೂ ಅನುಕರಣೀಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.