ADVERTISEMENT

ಮುಖ್ಯಮಂತ್ರಿ ಮಾತು ತಪ್ಪಿದವರು

ಎಸ್.ಕೆ.ನಾಗರಾಜು ಚಿಕ್ಕನಾಯಕನಹಳ್ಳಿ
Published 28 ಜೂನ್ 2018, 17:11 IST
Last Updated 28 ಜೂನ್ 2018, 17:11 IST

ಮುಖ್ಯಮಂತ್ರಿಯವರೇ,

2009 ಮತ್ತು ಆನಂತರದ ವರ್ಷಗಳಲ್ಲಿ ರೈತರು ಪಡೆದ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿರುವುದೇಕೆ? 2009ಕ್ಕೂ ಹಿಂದೆ ಸಾಲ ಮಾಡಿರುವವರು ರೈತರಲ್ಲವೇ? ‘ಸಾಲ ಮನ್ನಾಗೆ ಕಾಂಗ್ರೆಸ್‌ನವರು ಒಪ್ಪುವುದಿಲ್ಲ’ ಎಂದು ಹೇಳುತ್ತಿದ್ದೀರಲ್ಲಾ, ನಿಮ್ಮ ಮನೆ ಬಾಗಿಲಿಗೆ ಬಂದು, ನಿಮ್ಮಷರತ್ತುಗಳಿಗೆಲ್ಲಾ ಒಪ್ಪಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದವರು ಕಾಂಗ್ರೆಸ್‌ನವರೇ ತಾನೆ?

‘ರೈತರ ಹಿತ ಕಾಪಾಡುತ್ತೇನೆ’ ಎಂದು ಯಾವಾಗಲೂ ಹೇಳುತ್ತೀರಲ್ಲಾ, ಎಲ್ಲಾ ಹಸಿ ಸುಳ್ಳಾಯಿತು. ಅದಕ್ಕೇ ಹೇಳುವುದು, ನೀವು ‘ಮಾತು ತಪ್ಪಿದವರು’ ಅಂತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.