ಪ್ರಯಾಗ್ರಾಜ್ ಕುಂಭಮೇಳದ ಯಶಸ್ವಿ ನಿರ್ವಹಣೆಯಲ್ಲಿ ಬಂಟ್ವಾಳ ಮೂಲದ ಐಎಎಸ್ ಅಧಿಕಾರಿ ವಿಜಯ ಕಿರಣ್ ಆನಂದ್ ಪ್ರಮುಖ ಪಾತ್ರ ವಹಿಸಿದ್ದ ವರದಿ (ಪ್ರ.ವಾ., ಫೆ.14) ಪ್ರಶಂಸಾರ್ಹ.
ಇಂದು ದಿನಪತ್ರಿಕೆಗಳಲ್ಲಿ, ಭ್ರಷ್ಟರ ವಿಚಾರಗಳೇ ಹೆಚ್ಚು ಪ್ರಕಟವಾಗುತ್ತಾ ಓದುಗರಿಗೆ ಬೇಸರ ತರಿಸುತ್ತಿರುವಾಗ, ಈ ಸಮರ್ಥ ಅಧಿಕಾರಿಯ ಸಾಧನೆ ಓದಿ ಮಹದಾನಂದವಾಯಿತು. ಲಕ್ಷಾಂತರ ಭಕ್ತರು ಸೇರಿದ್ದ ಸ್ಥಳದಲ್ಲಿ ಕುಂದು ಕೊರತೆ ಇಲ್ಲದಂತೆ ಕಾರ್ಯನಿರ್ವಹಿಸಿದ ಅವರ ಕಾರ್ಯತತ್ಪರತೆ ಮತ್ತು ದಕ್ಷತೆಯನ್ನು ಸರ್ಕಾರ ಗುರುತಿಸಿ, ಗೌರವಿಸಬೇಕು.
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.