ADVERTISEMENT

ಸರಳ ಕಟ್ಟಡ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:30 IST
Last Updated 6 ನವೆಂಬರ್ 2020, 19:30 IST

ಹಣ, ಆರೇೂಗ್ಯ ಮತ್ತು ಲಾಲಸೆ ಕುರಿತ ಲೇಖನದಲ್ಲಿ (ಪ್ರ.ವಾ., ನ. 5) ಡಾ. ಶಿವಮೂರ್ತಿ ಮುರುಘಾ ಶರಣರು, ಶಾರೀರಕ ಶ್ರಮ ವಹಿಸುವ ದಿನಗೂಲಿ ನೌಕರರು, ಕೃಷಿಕರು, ಔದ್ಯೋಗಿಕ ಕೇಂದ್ರಗಳಲ್ಲಿ ಕೆಲಸ ಮಾಡುವವರನ್ನು ಕೊರೊನಾ ವೈರಾಣು ಹೆಚ್ಚಿಗೆ ಬಾಧಿಸುತ್ತಿಲ್ಲ ಎಂದು ಹೇಳಿರುವುದು ಚಿಂತನೆಗೆ ಹಚ್ಚುವಂತಿದೆ. ಜೊತೆಗೆ, ಐಷಾರಾಮಿ ಕಟ್ಟಡಗಳ ಆಸ್ಪತ್ರೆಗಳು, ಆ ಕಾರಣಕ್ಕಾಗಿಯೇ ದುಬಾರಿ ಶುಲ್ಕ ವಸೂಲಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಲೇೂಚಿಸುವಂತಾಗಿದೆ. ಆಸ್ಪತ್ರೆಗಳಲ್ಲಿ ಜನರ ನಿರೀಕ್ಷೆಯು ಗುಣಮಟ್ಟದ ಚಿಕಿತ್ಸೆಯಷ್ಟೇ. ಇದನ್ನು ಅರಿತು, ಸರಳ ಕಟ್ಟಡದ ಆಸ್ಪತ್ರೆಗಳನ್ನು ನಿರ್ಮಿಸುವತ್ತ
ಗಮನಹರಿಸಬೇಕಾಗಿದೆ.

- ಡಾ. ಟಿ.ಜಯರಾಂ,ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT