ADVERTISEMENT

ವಾಚಕರ ವಾಣಿ: ‘ಸತ್ಯ ಹರಿಶ್ಚಂದ್ರ’ನ ಬಗ್ಗೆ ಆತ್ಮಾವಲೋಕನವಾಗಲಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 2:46 IST
Last Updated 16 ಸೆಪ್ಟೆಂಬರ್ 2020, 2:46 IST

‘ಸತ್ಯ ಹರಿಶ್ಚಂದ್ರರಾದ ಪಿಡಿಒಗಳು ಎಲ್ಲಿದ್ದಾರೆ?’ ಎಂಬ ವಸತಿ ಸಚಿವರ ಪ್ರಶ್ನೆಯ ಸುತ್ತ ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳು ಹುಟ್ಟದಿರವು. ಇವರು ಹೇಳುವ ಪ್ರಕಾರ ಎಲ್ಲರೂ ಭ್ರಷ್ಟರು ಎಂದಾದರೆ, ಅವರಿಂದ ನಾವು ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ? ಪಿಡಿಒಗಳು ಮಾತ್ರ ಭ್ರಷ್ಟರೇ? ಹಾಗಿದ್ದರೆ ಚುನಾಯಿತ ಸದಸ್ಯರು ಇದನ್ನು ಕಂಡು ಸುಮ್ಮನಿರುವರೇ? ಯಾರು ಎಷ್ಟು ಸತ್ಯವಂತರು ಎಂಬುದರ ಬಗ್ಗೆ ಇತ್ತ ಅಧಿಕಾರಿಗಳು, ಅತ್ತ ಚುನಾಯಿತ ಪ್ರತಿನಿಧಿಗಳುಆತ್ಮಾವಲೋಕನ ಮಾಡಿಕೊಳ್ಳಬೇಕಾದಂತಹ ಸಂದರ್ಭ ಇದು.

ಅಧಿಕಾರಿಗಳು ಸರಿಯಿಲ್ಲ ಎಂದು ಅಧಿಕಾರಸ್ಥ ರಾಜಕಾರಣಿಗಳು ಬಹಿರಂಗವಾಗಿ ಹೇಳಿಕೆ ನೀಡುವುದು ಸಮಂಜಸವಲ್ಲ. ಇದು, ಅಧಿಕಾರಿ ವರ್ಗದ ಬಗ್ಗೆ ಜನರಲ್ಲಿ ಅವಿಶ್ವಾಸ ಮೂಡಿಸುತ್ತದೆ. ಅದರ ಬದಲು, ಅದಕ್ಷ, ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಿ. ದಕ್ಷರನ್ನು, ಪ್ರಾಮಾಣಿಕರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಲಿ.

–ಶ್ವೇತಾ ಎನ್. ಸೊರಬ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.