ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿರುವುದು ಸ್ತುತ್ಯರ್ಹ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಓದು– ಅಭ್ಯಾಸದ ಕಡೆ ಗಮನ ಕೇಂದ್ರೀಕರಿಸಲು ತೊಡಕಾಗಿಯೂ ಪರಿಣಮಿಸಿದೆ.
ಕೊರೊನಾ ಕಾಲದಲ್ಲಿ ಮಕ್ಕಳು ವಿಪರೀತ ಮೊಬೈಲ್ ಬಳಸುತ್ತಿದ್ದುದರಿಂದ ಅದೊಂದು ಗೀಳಾಗಿ ಪರಿಣಮಿಸಿದೆ. ಅದು ಆಗ ಅವಶ್ಯವೂ ಆಗಿತ್ತು. ಈಗ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಶಾಲೆಗಳು, ಪೋಷಕರು ಕೂಡಿ ಪ್ರಯತ್ನಪಟ್ಟರೆ ಇದು ಸಾಧ್ಯವಾಗುತ್ತದೆ. ಮಕ್ಕಳ ಮನವೊಲಿಸಿ ಈ ಕೆಲಸ ಸಾಧಿಸಬೇಕಾಗಿದೆ.
- ಎಚ್.ಎಸ್.ಟಿ.ಸ್ವಾಮಿ,ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.