ADVERTISEMENT

ವಾಚಕರ ವಾಣಿ| ಲಂಚ ಕೊಟ್ಟವರು ಯಾರು?

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:30 IST
Last Updated 15 ಮೇ 2020, 19:30 IST

ಲಾಕ್‌ಡೌನ್‌ ಅವಧಿಯಲ್ಲಿ ಸಿಗರೇಟ್‌ ಮಾರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ನಕಲಿ ಮಾಸ್ಕ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರಲು ಪೊಲೀಸರು ಲಂಚ ಪಡೆದ ಪ್ರಕರಣ (ಪ್ರ.ವಾ., ಮೇ 15) ವಿವರವಾಗಿ ವರದಿಯಾಗಿದೆ. ಇದರಲ್ಲಿ ಲಂಚ ಪಡೆದವರ ಹೆಸರು, ಹಣ ಪಡೆದ ವಿವರ ಎಲ್ಲವೂ ಇವೆ. ಆದರೆ ಲಂಚ ಕೊಟ್ಟವರು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕೆಲಸ ಬೇಗ ಆಗಲಿ ಎಂದು ಹಣ ಕೊಡುವುದು ಮಾಮೂಲು. ಇದರಲ್ಲಿ ಕೊಡುವವರು ಅಸಹಾಯಕರಾಗಿರುತ್ತಾರೆ ಮತ್ತು ಇದರಲ್ಲಿ ಇನ್ನೊಬ್ಬರಿಗೆ ಅನ್ಯಾಯ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ಕಂಪನಿಗಳು ನಕಲಿ ವಸ್ತುಗಳನ್ನು ದಾಟಿಸಲು ಯತ್ನಿಸುವುದು ಮತ್ತು ಲಂಚ ಕೊಡುವುದು ದ್ವಿಗುಣ ಅಪರಾಧ. ಲಂಚ ಪಡೆದವರಂತೆ ಲಂಚ ಕೊಟ್ಟವರು ಸಹ ಸಮಾನ ಅಪರಾಧಿಗಳು. ವಾಸ್ತವದಲ್ಲಿ ಇದು ಸುಲಿಗೆ ಪ್ರಕರಣ ಅಲ್ಲ. ಏಕೆಂದರೆ ಲಕ್ಷಗಟ್ಟಲೆ ಲಂಚ ನೀಡಿದವರು ಸಾಮಾನ್ಯರಲ್ಲ. ಆದ್ದರಿಂದ ಲಂಚ ಕೊಟ್ಟವರ ಮೇಲೆ ಯಾವ ರೀತಿ ಕ್ರಮ ಜರುಗಿಸಲಾಗುತ್ತಿದೆ ಎನ್ನುವುದು ಬಹಿರಂಗಗೊಳ್ಳಬೇಕು.

– ಪ್ರೊ. ಶಶಿಧರ್‌ ಪಾಟೀಲ್‌,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT