ಸಾಂವಿಧಾನಿಕ ಗುರಿಗೆ ದೂರವೇ ಉಳಿದುಹೋದ, ಇಂದು ರಾಜಕಾರಣದ ಆಡುಂಬೊಲವಾದ ಮೀಸಲಾತಿಯ ವಿಷಯವು ಮರು ಚರ್ಚೆಗೆ, ಮರು ವಿಶ್ಲೇಷಣೆಗೆ ಅರ್ಹ ಎಂಬ ಗಹನ ವಿಚಾರವನ್ನು ಚಂದ್ರಕಾಂತ ವಡ್ಡು ಪ್ರತಿ
ಪಾದಿಸಿದ್ದಾರೆ (ಪ್ರ.ವಾ., ನ. 26). ಆದರೆ ಲೇಖನದ ಕೊನೆಯಲ್ಲಿ, ‘ಸಾಮಾಜಿಕ ನ್ಯಾಯ ಪರಿಕಲ್ಪನೆಯೇ ಅಪ್ರಸ್ತುತ ಎಂಬ ಭ್ರಮೆ ಹುಟ್ಟಿಸುವ ಅಪಾಯಕಾರಿ ಘಟ್ಟದಲ್ಲಿ ನಿಂತಿದ್ದೇವೆ’ ಎಂದು ಹೇಳುವ ಮೂಲಕ ಅವರು ಲೇಖನವನ್ನು ಅಪೂರ್ಣವಾಗಿಸಿದರೇ ಎಂಬ ಪ್ರಶ್ನೆ ಮೂಡುತ್ತದೆ.
- ಕೆ.ಪುರುಷೋತ್ತಮ ರೆಡ್ಡಿ,ಪಾವಗಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.