ಟಿ. ನರಸೀಪುರದಲ್ಲಿ ನಡೆದ ಚಿರತೆ ದಾಳಿಯಲ್ಲಿ ಪುಟ್ಟ ಹುಡುಗನೊಬ್ಬ ಸಾವಿಗೀಡಾಗಿರುವುದು ನೋವಿನ ಸಂಗತಿ. ಇತ್ತೀಚೆಗೆ ರಾಜ್ಯದ ಕೆಲವು ಕಡೆ ಚಿರತೆಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ. ಆಗಾಗ ಮನುಷ್ಯರ ಮೇಲೆ ದಾಳಿ ನಡೆಸುತ್ತಲೇ ಇವೆ. ಮೂರು ತಿಂಗಳಲ್ಲಿ ಒಟ್ಟು ನಾಲ್ಕು ಸಾವುಗಳು ಚಿರತೆಗಳಿಂದಾಗಿ ಸಂಭವಿಸಿವೆ. ಚಿರತೆಗಳು ನಾಡಿಗೆ ಬರಲು ಕಾರಣ ಕಾಡಿನ ನಾಶವೇ ಆಗಿದೆ. ಕಾಡಿನಲ್ಲಿ ಜಾಗವಿಲ್ಲದೆ ಅವು ನಾಡಿಗೆ ಬರುತ್ತಿವೆ.
ಚಿರತೆಗಳಿಂದ ಜನರ ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಕಾಡುಗಳನ್ನು ಸಂರಕ್ಷಣೆ ಮಾಡಬೇಕು. ನಾಡಿಗೆ ಬಂದಂತಹ ಚಿರತೆಗಳನ್ನು ಕೂಡಲೇ ಹಿಡಿದು ಸುರಕ್ಷಿತ ಸ್ಥಳಕ್ಕೆ ಸೇರಿಸಬೇಕು. ಈ ಮೂಲಕ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು.
- ಪೂಜಾ ಎಸ್., ಕಲಬುರಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.