ಡಾ. ಚಂದ್ರಶೇಖರ ಕಂಬಾರರು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ (ಅವರಿಗೆ ಅಭಿನಂದನೆಗಳು).
ಒಂದು ಸ್ವಾರಸ್ಯವೆಂದರೆ, ರಾಷ್ಟ್ರಕವಿ ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನ’ದ ಆದಿಯಲ್ಲಿ (ಪುಟ 6) ಕಂಬಾರರನ್ನು ಸ್ಮರಿಸಿರುವುದು: ‘... ನನ್ನಯ್ಯ ಫಿರ್ದೂಸಿ ‘ಕಂಬಾರ’ವಿಂದರಿಗೆ...’ ಇಲ್ಲಿ ‘ಕಂಬಾರವಿಂದರಿಗೆ’ ಎಂಬುದನ್ನು ‘ಕಂಬ– ಅರವಿಂದರಿಗೆ’ ಎಂದು ಬಿಡಿಸಬೇಕು ಎಂದು ಕೆಲವರು ಹೇಳಬಹುದು. ಆದರೆ ‘ಕಂಬಾರ–ವಿಂದರಿಗೆ’ ಎಂದೂ ಬಿಡಿಸಬಹುದಲ್ಲ! ಹಾಗಾದರೆ, ‘ವಿಂದ’ ಎಂದರೇನು? ಅದು ‘ಅರವಿಂದ’ ಶಬ್ದದ ಹ್ರಸ್ವರೂಪವಾಗಬಹುದು (ಅರ್ಥರಹಿತವಲ್ಲ, ‘ವಿಂದ’; ಅದಕ್ಕೆ ಕಾಯುವವನು ಎಂದರ್ಥ).
ಒಟ್ಟಿನಲ್ಲಿ, ಕುವೆಂಪು ಅವರಿಂದ (ಅಪ್ರಜ್ಞಾಪೂರ್ವಕವಾಗಿ?) ಹೆಸರುಗೊಂಡಿರುವ ಚಂ. ಕಂಬಾರರು ಧನ್ಯರಲ್ಲವೆ? (ದ್ರಷ್ಟಾರರಾದ ಕುವೆಂಪು ಹಿಂದಿನವರಿಗೆ ಮಾತ್ರವಲ್ಲ, ಮುಂದಿನವರಿಗೂ ಮಣಿದಿದ್ದಾರೆ!)
-ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.