ADVERTISEMENT

ಮೇಲುಸಂಪಾದನೆಗೆ ಕಡಿವಾಣ ಹಾಕಬೇಕೆಂದರೆ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST

ಸರ್ಕಾರಿ ಕೆಲಸವೆಂದರೆ ಮೇಲುಸಂಪಾದನೆಗೆ ಸರಳವಾದ ಮಾರ್ಗ ಎಂಬ ಮನೋಭಾವ ಸಮಾಜದಲ್ಲಿದೆಎಂದು ರಾಜಕುಮಾರ ಕುಲಕರ್ಣಿ ಬರೆದಿದ್ದಾರೆ (ಸಂಗತ, ಜುಲೈ 24). ಕೆಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದ ತಕ್ಷಣ ಜನ ‘ಓಹ್‌ ಇವರು ಸುಮ್ನೆ ಇದ್ದರೂ ದುಡ್ಡು ಬರ್ತಾಇರತ್ತೆ, ಖರ್ಚಿಗಂತೂ ಮೋಸವಿಲ್ಲ, ಬರುವ ಸಂಬಳವನ್ನು ಬೇರೆ ಕಡೆ ಹೂಡಿಕೆ ಮಾಡಬಹುದು’ ಎನ್ನುವ ಸುಲಭ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆ ನೌಕರ ‘ಇಲ್ಲ ಇಲ್ಲ, ನಾನು ಆ ರೀತಿ ಏನೂ ತಗೊಳ್ಳಲ್ಲ, ಸಂಬಳದಲ್ಲೇ ನಮ್ಮ ಜೀವನ’ ಅಂದರೂ, ‘ಹೇ ಯಾರೂ ಸಾಚಾ ಅಲ್ಲ. ಬಂದದ್ದನ್ನು ಬೇಡ ಅನ್ನದೆ, ಬರೋವಾಗ ಸಿಕ್ಕಷ್ಟು ಗಳಿಸಿ ಆರಾಮಾಗಿರಿ’ ಅನ್ನುವ ಉತ್ತರ ಬರುತ್ತದೆ.

ಬರುವ ವೇತನದಲ್ಲೇ ನ್ಯಾಯಯುತವಾಗಿ ಜೀವನ ಸಾಗಿಸುತ್ತಿರುವ ಅದೆಷ್ಟೋ ನೌಕರರು ಇದ್ದಾರೆ. ಅವರ ಸೇವೆಯನ್ನು ಸರ್ಕಾರ ಗುರುತಿಸಬೇಕು. ಅಂಥವರ ದಕ್ಷತೆಗೆ ಸೂಕ್ತ ಮನ್ನಣೆ ನೀಡಿದರೆ ಲಂಚದ ಹಾವಳಿಗೆಕಡಿವಾಣ ಹಾಕಬಹುದೇನೋ.

- ಮಧು ಎನ್.ಬಿ.,ನಾರನಹಳ್ಳಿ, ದೊಡ್ಡಬಳ್ಳಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.