ADVERTISEMENT

ಹೊಸ ರಾಜಕೀಯ ಸಂಸ್ಕೃತಿಗೆ ಯತ್ನಿಸಿದರೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST

ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತಿಳಿದಾಗ, ಹಿಂದೆ ಆರೋಪಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಕೇಳಿದಾಗಲೂ ‘ಒಳ್ಳೆಯ ದಿನ’ದವರೆಗೆ ಕಾಲ ತಳ್ಳಿದ್ದುದು, ಸಂಖ್ಯಾಬಲ ಇಲ್ಲದಾಗಲೂ ಆರು ದಿನದ ಮುಖ್ಯಮಂತ್ರಿ ಆಗಿದ್ದುದು ಎಲ್ಲ ನೆನಪಾಯಿತು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದಕ್ಕಿಂತ ಯಡಿಯೂರಪ್ಪನವರು ತಮ್ಮ ನಾಲ್ಕು ದಶಕಗಳ ರಾಜಕಾರಣದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತರಲು ಯತ್ನಿಸಿದರೇ ಎಂಬ ಪ್ರಶ್ನೆ ಹೆಚ್ಚು ಮುಖ್ಯ, ಪ್ರಸ್ತುತ.

ಅಕಾಡೆಮಿ (ಚಲನಚಿತ್ರವೂ ಸೇರಿದಂತೆ), ನಿಗಮ, ಮಂಡಳಿಗಳ ಕೆಲವು ನೇಮಕಗಳು ಅನರ್ಹರಿಗೆ ಮಣೆ ಹಾಕಿದಂತಿದ್ದವು. ಅಧಿಕಾರಿಗಳ ವರ್ಗಾವರ್ಗಿಯಲ್ಲೂ ಆಸಕ್ತ ಹಿತಗಳ ಕೈವಾಡ ಇತ್ತು. ಅವರ ಸೆಕ್ರೆಟೇರಿಯಟ್‌ಗೆ ಕಳುಹಿಸಿದ ದೂರುಗಳಿಗೆ ಸ್ವೀಕೃತಿ ಕೂಡ ಸಿಗುತ್ತಿರಲಿಲ್ಲ.

ಒಂದೇ ಮೆಚ್ಚುಗೆಯ ಅಂಶ- ಈ ವಯಸ್ಸಿನಲ್ಲೂ ಸಾಕಷ್ಟು ಚಟುವಟಿಕೆಯಿಂದಿದ್ದಾರೆ. ಸಕ್ರಿಯ ರಾಜ
ಕಾರಣದಲ್ಲಿದ್ದೇ ರಾಜ್ಯಕ್ಕೆ ಸೇವೆ ಸಲ್ಲಿಸಬೇಕೆ- ಅವರಿಗೆ ಬಿಟ್ಟ ವಿಷಯ. ಒಟ್ಟಿನಲ್ಲಿ ಅವರ ಅಧಿಕಾರ ಪರ್ವವಂತೂ
ಅಂತ್ಯಗೊಂಡಿದೆ.

ADVERTISEMENT

-ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.