ADVERTISEMENT

ವಾಚಕರ ವಾಣಿ| ಪಕ್ಷಾತೀತ ಹೋರಾಟದಿಂದ ‘ಹಸಿರು’ ಭಾಗ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2020, 19:09 IST
Last Updated 17 ಮೇ 2020, 19:09 IST

ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಹತ್ತು ಟಿಎಂಸಿ ಅಡಿ ನೀರು ಹರಿಸಲು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ತಿಳಿಸಿರುವುದು ವರದಿಯಾಗಿದೆ. ಇದೊಂದು ಆಶಾದಾಯಕ ಹೆಜ್ಜೆ. ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸಾವಿರಾರು ಅಡಿ ಕೊಳವೆಬಾವಿ ಕೊರೆದರೂ ಹನಿ ನೀರಿಲ್ಲದೆ ಭೂಮಿ ಬೆಂಗಾಡಾಗಿದೆ. ಈಗ ಭದ್ರೆಯಿಂದ ಬರುವ ಕೇವಲ ಎರಡೇ ಎರಡು ಟಿಎಂಸಿ ಅಡಿ ನೀರಿಗಾಗಿ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಚಿತ್ರದುರ್ಗ ತಾಲ್ಲೂಕುಗಳ ಶಾಸಕರು, ರೈತರು, ಇತರ ಸಂಘಟನೆಗಳ ಪ್ರತಿನಿಧಿಗಳು ಪರಸ್ಪರ ಕಾದಾಡುತ್ತಾರೆ.

ಸಮುದ್ರ ಸೇರುವ ನೀರನ್ನು ಸದುಪಯೋಗ ಮಾಡಿಕೊಳ್ಳಲು ಬರಪೀಡಿತ ಜಿಲ್ಲೆಯ ಏಕೈಕ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುವ ಸಲುವಾಗಿ ಈ ಭಾಗದ ಶಾಸಕರು, ಸಂಸದರು, ಮಠಾಧೀಶರು, ರೈತ ಸಂಘಟನೆಗಳು ಮತ್ತು ಸಾರ್ವಜನಿಕರು ಪಕ್ಷಾತೀತವಾಗಿ ಹೋರಾಡಿದರೆ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಭಾಗದ ಪ್ರದೇಶಗಳು ಹಸಿರು ಕಾಣಬಹುದು.

ಶಾಂತವೀರ ಎಸ್.,ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.