ಮನುಕುಲವನ್ನು ಜ್ಞಾನಜ್ಯೋತಿಯಂತೆ ಬೆಳಗುವ ಪುಸ್ತಕಗಳ ಮಹತ್ವ ಅರಿತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬಿಇಒ ಜಿ.ಬಿ.ಬಳಗಾರ ಅವರು, ಸಾರ್ವಜನಿಕರಿಂದ ಪುಸ್ತಕಗಳ ಸಂಗ್ರಹಕ್ಕಾಗಿ ಆರಂಭಿಸಿರುವ ‘ಪುಸ್ತಕ ಜೋಳಿಗೆಗೆ ನಿಮ್ಮದೊಂದು ಪುಸ್ತಕ ಹೋಳಿಗೆ’ ಉಪಕ್ರಮ ಶ್ಲಾಘನೀಯ. ಈ ರೀತಿಯ ಸತ್ಕಾರ್ಯವನ್ನು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿನ ಬಿಇಒಗಳು ಮತ್ತು ಆಸಕ್ತ ಶಿಕ್ಷಕರು ಕೈಗೊಂಡರೆ ಓದುಗರಿಗೆ ಉಪಯೋಗವಾಗುತ್ತದೆ.
- ಶಿವನಕೆರೆ ಬಸವಲಿಂಗಪ್ಪ,ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.