ADVERTISEMENT

ವಾಚಕರ ವಾಣಿ: ಲತಾ, ಲಹರಿ ಸ್ಮರಿಸದೇ ಇದ್ದುದೇಕೆ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 23:15 IST
Last Updated 4 ಮಾರ್ಚ್ 2022, 23:15 IST

ಬೆಂಗಳೂರಿನಲ್ಲಿ ಗುರುವಾರ ನಡೆದ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ, ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರ ಹೆಸರೇ ಕೇಳಿಬರದಿದ್ದುದು ಬೇಸರದ ಸಂಗತಿ. ಹೋಗಲಿ, ಲತಾ ಮಂಗೇಶ್ಕರ್ ಅವರ ಒಂದು ಹಾಡೂ ಕೇಳಿ ಬರಲಿಲ್ಲ, ಅವರ ಹಾಡಿಗೆ ಒಂದು ನೃತ್ಯವನ್ನೂ ನೋಡಲಿಲ್ಲ. ಅಂತರರಾಷ್ಟ್ರೀಯ ಖ್ಯಾತಿಯ ಇಂತಹ ದಿಗ್ಗಜರನ್ನೇ ಸ್ಮರಿಸದವರು ಇನ್ನು ಈಚಿನ ದಿನಗಳಲ್ಲಿ ನಮ್ಮನ್ನು ಅಗಲಿದ ಕನ್ನಡ ನಟರಾದ ಶಿವರಾಂ, ಸಂಚಾರಿ ವಿಜಯ್ ಅಂತಹವರನ್ನು ಸ್ಮರಿಸುತ್ತಾರೆಯೇ?

ಸತ್ಯನಾರಾಯಣ ಎ.ವಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT