ADVERTISEMENT

ವಾಚಕರ ವಾಣಿ: ಕಸಾಪ: ಮಹಿಳೆಯರಿಗೆ ಸಿಗಲಿ ಆದ್ಯತೆ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 19:57 IST
Last Updated 27 ಫೆಬ್ರುವರಿ 2022, 19:57 IST

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಹಿಳಾ ಜಯಂತಿ ಆಚರಣೆ ಏಕಿಲ್ಲ ಎಂದು ಸುಮಾ ಅವರು ಪ್ರಶ್ನಿಸಿರುವುದು (ವಾ.ವಾ., ಫೆ. 26) ಸರಿಯಾಗಿಯೇ ಇದೆ. ಈವರೆಗೆ ಆಗಿರುವ ಎಂಬತ್ತಕ್ಕೂ ಅಧಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನದ ಅಧ್ಯಕ್ಷ ಗಾದಿಗೆ ಏರಿದವರು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ. ಹಾಗೆಯೇ ಕಸಾಪ ಈಗ ಐವರ ಜಯಂತಿ ಆಚರಣೆಯನ್ನು ಮಾಡಹೊರಟಿರುವುದು ಸ್ವಾಗತಾರ್ಹ. ಜೊತೆಗೆ ಕನ್ನಡದ ಮೊದಲ ಲೇಖಕಿ ಅಕ್ಕಮಹಾದೇವಿ ಅವರಂತಹ ಕವಯತ್ರಿಯರ ದಿನಾಚರಣೆಯನ್ನೂ ಮಾಡಲಿ.

ಸಿರಿಗೇರಿ ಯರಿಸ್ವಾಮಿ,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT