ADVERTISEMENT

ವಾಚಕರ ವಾಣಿ: ರಾಷ್ಟ್ರಧ್ವಜ- ಅರಿವು ಮೂಡಿಸಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 19:30 IST
Last Updated 8 ಆಗಸ್ಟ್ 2022, 19:30 IST

ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೋರಿದೆ. ಎಲ್ಲರಿಗೂ ರಾಷ್ಟ್ರಧ್ವಜ ಸುಲಭವಾಗಿ ಲಭ್ಯವಾಗುವಂತೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೆ ಹಾರಾಟದ ನಿಯಮಾವಳಿಗಳಿಗೆ ಸಹ ತಿದ್ದುಪಡಿ ತರಲಾಗಿದೆ. ಈ ಸಮಯದಲ್ಲಿ ರಾಷ್ಟ್ರಧ್ವಜದಲ್ಲಿನ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಗ್ಗೆ, ಧ್ವಜದ ಮಧ್ಯದಲ್ಲಿ ಇರುವ ಅಶೋಕ ಚಕ್ರದ ಬಗ್ಗೆ ದಿನಪತ್ರಿಕೆಗಳು, ವಿವಿಧ ದೃಶ್ಯಮಾಧ್ಯಮಗಳ ಜೊತೆಗೆ ಭಿತ್ತಿಪತ್ರಗಳ ಮುಖೇನ ಸಹ ಅಗತ್ಯ ತಿಳಿವಳಿಕೆ ನೀಡುವುದು ಹೆಚ್ಚು ಸೂಕ್ತ.

-ಕೆ.ಪ್ರಭಾಕರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT