ADVERTISEMENT

ವಾಚಕರ ವಾಣಿ: ವೈಯಕ್ತಿಕ ನಿಂದನೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 19:30 IST
Last Updated 25 ಸೆಪ್ಟೆಂಬರ್ 2022, 19:30 IST

‘ಪೇಸಿಎಂ ಎಂಬುದು ಒಂದು ಅಭಿಯಾನ ಮತ್ತು ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಳ್ಳಬೇಕಾಗಿತ್ತು’ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್‌ನವರು ಅದನ್ನು ಎಷ್ಟೇ ಸಮರ್ಥಿಸಿಕೊಂಡರೂ ಅದರಲ್ಲಿ ಮುಖ್ಯಮಂತ್ರಿಯವರ ಫೋಟೊ ಹಾಕಿದ್ದು ಎಷ್ಟು ಸರಿ? ಇದು ಒಂದು ರೀತಿಯ ವೈಯಕ್ತಿಕ ನಿಂದನೆ ಅಲ್ಲವೇ?

ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದೆ. ಆದರೆ ಅವರು ಆ ಅವಕಾಶವನ್ನು ಕಳೆದುಕೊಳ್ಳುವ ರೀತಿ ವರ್ತಿಸುತ್ತಿದ್ದಾರೆ. ಅವರ ಅಭಿಯಾನದ ಉದ್ದೇಶವೇನೇ ಇರಲಿ, ಜನರ ಮುಂದೆ ಸಣ್ಣತನ ತೋರಿಸುವುದು ಸರಿಯಲ್ಲ.

- ಪ್ರಸನ್ನ ಗಣಪತಿ ಎ.ಎಚ್‌., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.