ವಿನಿವಿಂಕ್, ಆ್ಯಂಬಿಡೆಂಟ್ ಮುಂತಾದ ದಗಾ ಕಂಪನಿಗಳ ಸಾಲಿಗೆ ಈಗ ಐಎಂಎ ಸಮೂಹ ಕೂಡಾ ಸೇರಿಕೊಂಡಿತೇ? ಸರ್ಕಾರ, ಪೊಲೀಸರು ಹಾಗೂ ಮಾಧ್ಯಮಗಳು ಸಾರ್ವಜನಿಕರನ್ನು ಎಚ್ಚರಿಸುತ್ತಲೇ ಬಂದಿದ್ದರೂ ಮತ್ತೆಮತ್ತೆ ಇಂತಹ ‘ತೋಳ’ಗಳಿಗೆ ಮನುಜರು ಕುರಿಗಳಂತೆ ಸಿಲುಕುತ್ತಲೇ ಇದ್ದಾರೆ. ಇದಕ್ಕೆ ಮೂಲ ಕಾರಣ, ಜನರ ದುರಾಸೆ ಮತ್ತು ಬೆವರು ಸುರಿಸದೆ ಬಲುಬೇಗ ಹಣ ಮಾಡುವ ತವಕ. ಈ ವಿಚಾರದಲ್ಲಿ ದಗಾಕೋರರಿಗಿಂತ, ಅತ್ಯಧಿಕ ಲಾಭಕ್ಕಾಗಿ ದುರಾಸೆಪಟ್ಟ ಸದಸ್ಯರ ತಪ್ಪೇ ಹೆಚ್ಚು. ಇನ್ನಾದರೂ ಇಂತಹ ವಂಚಕರ ಮಾತಿಗೆ ಮರುಳಾಗದಿರಲಿ.
-ಪಿ.ಎಂ.ಕೀರ್ತಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.