ದಿನ ನಿತ್ಯ...ನಾವು ಆಹಾರ, ಗಾಳಿ, ಸುದ್ದಿಯನ್ನು ಸೇವಿಸುವುದು ಅನಿವಾರ್ಯವಾಗಿ ಬಿಟ್ಟಿದೆ. ಈಗಾಗಲೇ ಆಹಾರ, ಗಾಳಿ ಕಲುಷಿತಗೊಂಡು ಅದನ್ನು ಸೇವಿಸುತ್ತಾ ನಾವೇ ಒಗ್ಗಿಕೊಂಡುಬಿಟ್ಟಿದ್ದೇವೆ.
ಇನ್ನು ಸುದ್ದಿಯ ಸುದ್ದಿಗೆ ಬಂದರೆ, ಈ ಮುಂಚೆ ಒಬ್ಬನೇ ಬಾಣಸಿಗನಿದ್ದು, ಅವನು ಮಾಡಿ ಬಡಿಸುತ್ತಿದ್ದದ್ದು ರುಚಿಯಾಗಿಯೂ, ಕರ್ಣಹಿತವಾಗಿಯೂ ಇರುತ್ತಿತ್ತು. ಆದರೆ, ಈಗ ಅಸಂಖ್ಯಾತ ಬಾಣಸಿಗರು ಒಂದೇ ಸುದ್ದಿಯನ್ನು ವಿಧ ವಿಧವಾಗಿ ರುಬ್ಬಿ ರುಬ್ಬಿ ತಮಗೆ ಇಷ್ಟ ಬಂದಂತೆ ಬಡಿಸುತ್ತಾ ಇರುವುದನ್ನು ನೋಡಿದರೆ, ಆ ಭಗವಂತ ನಮ್ಮ ಕಣ್ಣಿಗೆ ರೆಪ್ಪೆ ಕೊಟ್ಟಂತೆ, ಕಿವಿಗೂ ಯಾಕೆ ಕೊಡಲಿಲ್ಲಪ್ಪ ಅಂತ ಬೇಜಾರಾಗ್ತಿದೆ....!–ವಿ.ವಿಜಯೇಂದ್ರ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.