ADVERTISEMENT

ಸೆಕ್ಯುಲರ್‌ ಗಣರಾಜ್ಯಕ್ಕೆ ಜಯಂತಿಯ ಉಸಾಬರಿ ಏಕೆ?

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:15 IST
Last Updated 8 ಆಗಸ್ಟ್ 2019, 20:15 IST

ಗಾಂಧಿ ಜಯಂತಿ ಮತ್ತು ಅಂಬೇಡ್ಕರ್‌ ಜಯಂತಿ ವಿನಾ ಬೇರೆ ಯಾರ ಜಯಂತಿಗಳನ್ನೂ ಸರ್ಕಾರ ಆಚರಿಸಬಾರದು ಎಂಬ ಅಭಿಪ್ರಾಯವನ್ನು ಭೀಮಾಶಂಕರ ಹಳಿಸಗರ ವ್ಯಕ್ತಪ‍ಡಿಸಿದ್ದಾರೆ (ವಾ.ವಾ., ಆ.2). ನಮ್ಮದು ಸೆಕ್ಯುಲರ್ ಗಣರಾಜ್ಯ. ಸರ್ಕಾರಕ್ಕೂ ಜಾತಿ ಮತಗಳಿಗೂ ಯಾವ ಸಂಬಂಧವೂ ಇರಬಾರದು. ಹೀಗಿರುವಾಗ, ನಮ್ಮ ದೇಶ ನಿಜವಾಗಿಯೂ ಸೆಕ್ಯುಲರ್ ಎಂಬ ದೃಢ ವಿಶ್ವಾಸವಿದ್ದರೆ, ಯಾರೊಬ್ಬರ ಜಯಂತಿಯನ್ನೂ ಸರ್ಕಾರದ ವತಿಯಿಂದ ಆಚರಿಸಬಾರದು. ಈಗಿರುವ ಶಿಕ್ಷಕರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯ ಜೊತೆಗೆ ಹುತಾತ್ಮರ ದಿನಾಚರಣೆ ಎಂದಷ್ಟೇ, ರಜೆ ಕೊಡದೆ ಸರಳವಾಗಿ ಆಚರಿಸಲಿ. ಆಯಾ ಧರ್ಮದವರಿಗೆ ಅವರವರ ಹಬ್ಬಗಳ ಸಂದರ್ಭದಲ್ಲಿ ನಿರ್ಬಂಧಿತ ರಜೆ (ಆರ್‌.ಎಚ್) ನೀಡುವುದು ಒಳ್ಳೆಯದು.

–ವಿನಿತಾ ಕೆ.ಸಿ.,ಕುಶಾಲನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT