ADVERTISEMENT

ವಾಚಕರ ವಾಣಿ | ರಾಜಕೀಯ ಸೇರ್ಪಡೆ: ಯುವಕರಿಗೆ ಸ್ಫೂರ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 19:30 IST
Last Updated 26 ಆಗಸ್ಟ್ 2020, 19:30 IST

ದೇಶದ ರಾಜಕೀಯ ಶುದ್ಧೀಕರಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲು ಪ್ರಜ್ಞಾವಂತ ನಾಗರಿಕರು, ಅದರಲ್ಲೂ ನಾಗರಿಕ ಸೇವಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಗಳು ಸಕ್ರಿಯ ರಾಜಕೀಯಕ್ಕೆ ಬರುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ, ಶಾಸನಸಭೆಗಳ ಮೂಲಕ ಅಂತಹ ಬದಲಾವಣೆ ತರಬಹುದು ಎಂದು ಭಾವಿಸಿ ರಾಜಕೀಯಕ್ಕೆ ಯಾರಾದರೂ ಬರುವುದಾದರೆ ಅಂಥವರನ್ನು ಸ್ವಾಗತಿಸೋಣ.

ಜಡ್ಡುಗಟ್ಟಿದ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬಯಸಿ, ತಮ್ಮ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ಕೆ.ಅಣ್ಣಾಮಲೈ ಅವರ ನಡೆಯು ಪ್ರಜ್ಞಾವಂತ ಯುವಕರಿಗೆ ಸ್ಫೂರ್ತಿಯಾಗಲಿ.

-ಬಾಬು ಶಿರಮೋಜಿ,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.