ದೇಶದ ರಾಜಕೀಯ ಶುದ್ಧೀಕರಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲು ಪ್ರಜ್ಞಾವಂತ ನಾಗರಿಕರು, ಅದರಲ್ಲೂ ನಾಗರಿಕ ಸೇವಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಗಳು ಸಕ್ರಿಯ ರಾಜಕೀಯಕ್ಕೆ ಬರುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ, ಶಾಸನಸಭೆಗಳ ಮೂಲಕ ಅಂತಹ ಬದಲಾವಣೆ ತರಬಹುದು ಎಂದು ಭಾವಿಸಿ ರಾಜಕೀಯಕ್ಕೆ ಯಾರಾದರೂ ಬರುವುದಾದರೆ ಅಂಥವರನ್ನು ಸ್ವಾಗತಿಸೋಣ.
ಜಡ್ಡುಗಟ್ಟಿದ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬಯಸಿ, ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ಕೆ.ಅಣ್ಣಾಮಲೈ ಅವರ ನಡೆಯು ಪ್ರಜ್ಞಾವಂತ ಯುವಕರಿಗೆ ಸ್ಫೂರ್ತಿಯಾಗಲಿ.
-ಬಾಬು ಶಿರಮೋಜಿ,ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.