ADVERTISEMENT

ವಾಚಕರ ವಾಣಿ: ಹೊಸ ಸೇರ್ಪಡೆ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 22:45 IST
Last Updated 21 ಅಕ್ಟೋಬರ್ 2022, 22:45 IST

ಕರ್ನಾಟಕದಲ್ಲಿ ಜೈಲಿನಿಂದಲೇ ಭೂಗತಲೋಕದ ಚಟುವಟಿಕೆಗಳನ್ನು ನಡೆಸಿದಂತಹ ಪಾತಕಿಗಳ ಉದಾಹರಣೆಗಳುಂಟು. ಅದೇ ರೀತಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ ರಾಜಕಾರಣಿಗಳುಂಟು. ಸಾಮಾನ್ಯ ಕೈದಿಗಳು ಜೈಲಿನಿಂದಲೇ ಅಧ್ಯಯನ ಮಾಡಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದ ಉದಾಹರಣೆಗಳು ಉಂಟು. ಈಗ, ಸ್ವಾಮೀಜಿಯೊಬ್ಬರು ಜೈಲಿನಿಂದಲೇ ತಮ್ಮ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿ, ಮಠ ನಡೆಸುತ್ತಿರುವುದು ಹೊಸ ಸೇರ್ಪಡೆ!

ಜೆ.ಬಿ. ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT