ADVERTISEMENT

ಕಾಗದದ ವ್ಯರ್ಥ ಬಳಕೆ ಸರಿಯಲ್ಲ

ಜೆ.ಜಿ.ಉಪಾಧ್ಯಾಯ.ಪುತ್ತೂರು
Published 4 ಡಿಸೆಂಬರ್ 2019, 20:29 IST
Last Updated 4 ಡಿಸೆಂಬರ್ 2019, 20:29 IST
   

ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತರಿಸಲು ವಿದ್ಯಾರ್ಥಿಗಳಿಗೆ 42 ಪುಟಗಳ ಬುಕ್‌ಲೆಟ್ ಕೊಡುವ ಪಿಯು ಮಂಡಳಿಯ ನಿರ್ಧಾರ ದುರದೃಷ್ಟಕರ ಮತ್ತು ವಿವೇಚನಾರಹಿತವಾದುದು. ಎಲ್ಲೋ ಶೇ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿಗೆ ಗಣಿತದಂತಹ ಒಂದೆರಡು ವಿಷಯಗಳಿಗೆ 20ಕ್ಕಿಂತ ಹೆಚ್ಚು ಪುಟಗಳು ಬೇಕಾಗಬಹುದು. ಅದಕ್ಕಾಗಿ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಿಗೂ ಹೆಚ್ಚಿನ ಪೇಪರ್ ಕೊಡುವುದು ಅನುಚಿತ ಮಾತ್ರವಲ್ಲ ಕಾಗದದ ವ್ಯರ್ಥ ಬಳಕೆಯೇ ಸರಿ.

ಆರೇಳು ಲಕ್ಷ ವಿದ್ಯಾರ್ಥಿಗಳಿಗೆ ಆರು ವಿಷಯಗಳಿಗೆ ವ್ಯರ್ಥವಾಗುವ ಕಾಗದದ ಪ್ರಮಾಣವೆಷ್ಟು ಎಂಬುದನ್ನು ಊಹಿಸಿದರೆ ಅಗಾಧತೆಯ ಅರಿವಾಗುತ್ತದೆ. ಹೆಚ್ಚುವರಿ ಹಾಳೆಗಳನ್ನು ಕಿತ್ತುಹೋಗದಂತೆ ಕೊನೆಯ ಶೀಟಿನ ಒಳಗೆ ಕಟ್ಟುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಕಾಗದರಹಿತ ಕಚೇರಿಗಳ ಮೂಲಕ ಪರಿಸರದ ಮೇಲಿನ ಒತ್ತಡ ತಗ್ಗಿಸುವ ಯೋಚನೆಯನ್ನೇ ಅಪಹಾಸ್ಯ ಮಾಡುವಂತಿದೆ ಈ ತೀರ್ಮಾನ. ಹೆಚ್ಚುವರಿ ಹಾಳೆಗಳನ್ನು ಪಡೆಯಲು ಸಮಯ ವ್ಯರ್ಥವಾಗುತ್ತದೆ ಎಂಬುದು ವ್ಯರ್ಥ ಸಬೂಬು. ಇಲಾಖೆ ತನ್ನ ತೀರ್ಮಾನವನ್ನು ಮರುಪರಿಶೀಲಿಸಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.