ಇತ್ತೀಚೆಗೆ ಪಕ್ಷ ಬಿಟ್ಟು ಹೋದವರು, ಇತರ ಪಕ್ಷಗಳೊಂದಿಗೆ ಗುರುತಿಸಿಕೊಂಡವರಿಗೆ ಆಯಾ ಪಕ್ಷದ ನಾಯಕರು ‘ಇನ್ನು ಅವರಿಗೆ ಪಕ್ಷದ ಬಾಗಿಲು ಬಂದ್. ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ’ ಎನ್ನುವ ಹೇಳಿಕೆ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುತ್ತದೆ. ಹೌದು, ಈ ರಾಜಕೀಯ ಪಕ್ಷಗಳ ಬಾಗಿಲುಗಳಿಗೆ ಯಾವತ್ತೂ ಒಳಗಿನಿಂದ ಚಿಲಕ, ಹೊರಗಿನಿಂದ ಬೀಗ ಖಂಡಿತ ಇರುವುದಿಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ತಳ್ಳಿದರೆ ತೆರೆಯುತ್ತವೆ. ಅಂತಹ ವಿಶೇಷ ಬಾಗಿಲುಗಳು ಇವು!
–ನಗರ ಗುರುದೇವ್ ಭಂಡಾರ್ಕರ್,ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.