ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಾಗ ಈ ಬಾರಿ ದಕ್ಷಿಣ ಭಾರತಕ್ಕೆ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣದ ನಾಲ್ಕು ರಾಜ್ಯಗಳಿಗೆ ಈ ಸಲ ಪ್ರಾತಿನಿಧ್ಯ ಲಭಿಸಿರುವುದು ವಿಶೇಷ. ಇದರೊಂದಿಗೆ ಬಿಜೆಪಿಯು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿದೆ. ಅದು, ತನಗಂಟಿರುವ ದಕ್ಷಿಣ ವಿರೋಧಿ ಕಳಂಕದಿಂದ ಹೊರಬರುವುದರೊಂದಿಗೆ, ಮುಂಬರುವ ಚುನಾವಣೆಯಲ್ಲಿ ದಕ್ಷಿಣದ ಸೀಮೋಲ್ಲಂಘನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಅಡಿ ಇಟ್ಟಂತೆ ಕಾಣುತ್ತದೆ. ಈ ನಾಮನಿರ್ದೇಶನದ ಹಿಂದಿನ ರಾಜಕೀಯ ಲೆಕ್ಕಾಚಾರ ಏನೇ ಇರಲಿ, ಈ ಬಾರಿಯ ಆಯ್ಕೆಯು ಟೀಕೆಗೆ ಆಸ್ಪದ ಕೊಟ್ಟಿಲ್ಲ ಎಂಬುದಂತೂ ಸ್ಪಷ್ಟ.
⇒ರಮಾನಂದ ಶರ್ಮಾ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.