ADVERTISEMENT

‌ಒ.ಟಿ.ಪಿ ಕೂಡ ತೆಗೆಯಲಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST

ಪಡಿತರದಾರರಿಗೆ ಸರ್ಕಾರ ಎರಡು ತಿಂಗಳ ರೇಷನ್ ಅನ್ನು ಒಮ್ಮೆಲೇ ನೀಡುತ್ತಿರುವುದು ಅಭಿನಂದನಾರ್ಹ. ಆದರೆ ಅದಕ್ಕಾಗಿ ಬಯೊಮೆಟ್ರಿಕ್ ಬದಲು ಒ.ಟಿ.ಪಿ. ಬಳಕೆ ಸರಿಯಾದ ಕ್ರಮವಲ್ಲ. ಕೆಲವರ ಮೊಬೈಲ್ ನಂಬರ್‌ ಬದಲಾಗಿರಬಹುದು, ಇನ್ನು ಕೆಲವರದು ಕಳೆದಿರಬಹುದು ಅಥವಾ ಚಾಲನೆಯಲ್ಲಿ ಇಲ್ಲದೇ ಇರಬಹುದು. ಈಗ ಅಂತಹವರು ನಂಬರ್ ಬದಲಾಯಿಸಲು ಪರದಾಡಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಎರಡು ತಿಂಗಳ ಮಟ್ಟಿಗೆ ಪಡಿತರದ ವಿಚಾರದಲ್ಲಿ ನಿಯಮಗಳನ್ನು ಪಕ್ಕಕ್ಕೆ ಇಡಬೇಕು. ಇಲ್ಲದಿದ್ದರೆ ಸರ್ಕಾರದ ಪಾತ್ರವು ಎಮ್ಮೆ ತಂದು ಗಡಿಗೆ ತರಲು ಹಿಂಜರಿದಂತೆ ಆಗಬಹುದು!

-ರಂಗಸ್ವಾಮಿ ಮಾರ್ಲಬಂಡಿ, ಸಿಂದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT