ADVERTISEMENT

 ಆರ್‌ಬಿಐ ನಿರ್ಧಾರ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:01 IST
Last Updated 1 ಜುಲೈ 2019, 20:01 IST
   

ಎಟಿಎಂಗಳಲ್ಲಿ ಹಣ ಖಾಲಿಯಾದ 3 ಗಂಟೆಯೊಳಗೆ ಮತ್ತೆ ಹಣ ತುಂಬಿಸದ ಬ್ಯಾಂಕುಗಳಿಗೆ ದಂಡ ವಿಧಿಸಲು ಆರ್‌ಬಿಐ ಮುಂದಾಗಿರುವುದು ಸ್ವಾಗತಾರ್ಹ. ಬಹುತೇಕ ಎಟಿಎಂಗಳಲ್ಲಿ ಯಾವಾಗ ನೋಡಿದರೂ ‘ನೋ ಬ್ಯಾಲೆನ್ಸ್’ ಫಲಕ ನೋಡಿ ಗ್ರಾಹಕರು ರೋಸಿಹೋಗಿದ್ದಾರೆ. ಹತ್ತಾರು ಎಟಿಎಂಗಳಿಗೆ ಅಲೆದಾಡಿದರೂ ಹಣ ದೊರೆಯ ದಿರುವುದೂ ಇದೆ. ಗ್ರಾಹಕರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಬಿಐ ನಿರ್ಧಾರ ಸೂಕ್ತವಾಗಿದೆ.

-ಪರಮೇಶ್ವರ ಬಿ. ಬಿರಾದಾರ,ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT