ADVERTISEMENT

ವಾಚಕರ ವಾಣಿ| ಹಿಂದಿಯನ್ನು ಮತ್ತೊಮ್ಮೆ ಒಪ್ಪುವುದೇನಿದೆ?

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 19:30 IST
Last Updated 24 ಜನವರಿ 2021, 19:30 IST
   

ಈ ದೇಶದ ವೈವಿಧ್ಯವನ್ನು ಅರಿತಿದ್ದ ಸಂವಿಧಾನಕರ್ತರು, ಸಂಸದರು ಹಿಂದಿಯನ್ನು ಯಾವ ರಾಜ್ಯದ ಮೇಲೂ ಹೇರಲಿಲ್ಲವೆಂಬ ಸತ್ಯ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ದೊಡ್ಡರಂಗೇಗೌಡರು ಒಂದೆಡೆ, ಕನ್ನಡದ ಅಸ್ಮಿತೆ ಬಗೆಗೆ ಮಾತನಾಡಿದ್ದಾರೆ, ಇನ್ನೊಂದೆಡೆ, ಹಿಂದಿ ಭಾಷೆಯನ್ನು ಏಕೆ ಒಪ್ಪಬಾರದು ಎಂದು ಪ್ರಶ್ನಿಸಿದ್ದಾರೆ. ಒಪ್ಪದಿದ್ದರೆ ತ್ರಿಭಾಷಾ ಸೂತ್ರ ಸಾಧ್ಯವಾಗುತ್ತಿತ್ತೇ? ಕನ್ನಡಿಗರಾದ ನಾವು ಶಾಲಾ ಹಂತದಲ್ಲೇ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಯುತ್ತಿಲ್ಲವೇ? ಹಾಗಿದ್ದರೆ ಒಪ್ಪುವುದೇನಿದೆ? ಭಾಷೆಯ ಆಧಾರದಲ್ಲಿ ಬಾಂಗ್ಲಾದೇಶದಿಂದ ಹಿಡಿದು ಯುರೋಪ್ ರಾಷ್ಟ್ರಗಳವರೆಗೆ ಕ್ರಾಂತಿಯೇ ನಡೆದುಹೋಗಿದೆ.

ರಾಷ್ಟ್ರತ್ವ (ನೇಷನ್‍ಹುಡ್) ಎಂಬ ಪರಿಕಲ್ಪನೆ ಯುರೋಪ್‍ನ ಸಣ್ಣ ರಾಷ್ಟ್ರಗಳಿಗೆ ಅನ್ವಯಿಸಿದಷ್ಟು ಸುಲಭವಾಗಿ ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತದ ಅಷ್ಟೂ ಭಾಷೆ, ಪಂಗಡಗಳು ಪರಸ್ಪರ ಮಾರಾಮಾರಿ ನಡೆಸದೆ ಒಟ್ಟಾಗಿ ಜೀವಿಸುತ್ತಿರುವ ಕಾರಣಗಳನ್ನು ಮನಗಾಣಬೇಕು.

- ಶಾಂತರಾಜು ಎಸ್,ಮಳವಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.