ಭ್ರಷ್ಟಾಚಾರ ರಹಿತವಾಗಿ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಸರ್ಕಾರ ಬೇಕೆನ್ನುವುದು ಸರ್ವರ ಬಯಕೆ ಅಲ್ಲವೇ? ಹಾಗಿದ್ದ ಮೇಲೆ ಎಲ್ಲಾ ಮತದಾರರೂ ಸ್ವಯಂ ಪ್ರಮಾಣ ವಚನ ಸ್ವೀಕರಿಸಬೇಕು. ಅದರ ಪ್ರಕಾರ ನಡೆದುಕೊಳ್ಳಬೇಕು.
ಅದೆಂದರೆ, ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ನಿಯಮಬಾಹಿರವಾದ ಯಾವುದೇ ಕೃತ್ಯಕ್ಕೆ ಕೈಹಾಕುವುದಿಲ್ಲ, ಕೆಲಸಗಾರರು ಅಥವಾ ಅಧೀನ ನೌಕರರ ಮೇಲೆ ದಬ್ಬಾಳಿಕೆ ಮಾಡುವುದಿಲ್ಲ, ಕಾನೂನು, ನೀತಿ ನಿಯಮಗಳನ್ನು ಪರಿಪಾಲಿಸುತ್ತೇವೆ ಎಂಬಂತಹ ನಿಬಂಧನೆಗಳನ್ನು ತಮಗೆ ತಾವೇ ವಿಧಿಸಿಕೊಳ್ಳಬೇಕು. ಅದಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು.ಹೀಗಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.
-ಸಂತೋಷ್ ಹ. ರಾಯ್ಕರ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.