ADVERTISEMENT

ನಾಡಗೀತೆ: ತರಾತುರಿ ಏಕೆ?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 15:56 IST
Last Updated 7 ಅಕ್ಟೋಬರ್ 2021, 15:56 IST

ನಾಡಗೀತೆ ಹಾಡುವ ಧಾಟಿ ಹೇಗಿರಬೇಕು ಮತ್ತು ಎಷ್ಟು ಸಮಯ ಹಾಡಬೇಕೆಂಬ ಬಗ್ಗೆ ಸರ್ಕಾರ ರಚಿಸಿರುವ ಸಮಿತಿ, ಈ ಸಂಬಂಧ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿರುವುದು ವರದಿಯಾಗಿದೆ. ನಾಡಗೀತೆಯ ಬಗ್ಗೆ ಬಹಳಷ್ಟು ಚರ್ಚೆ ನಡೆದು ನಂತರ ಅಂತಿಮಗೊಳಿಸಿದ್ದು, ಒಂದು ಜನಪ್ರಿಯ ಧಾಟಿಯಲ್ಲಿ ಹಾಡಲಾಗುತ್ತಿದೆ. ಹೀಗಿರುವಾಗ ಅದರ ಬಗ್ಗೆ ಸಲಹೆ ನೀಡಲು ಹೊಸದಾಗಿ ಸಮಿತಿ ರಚಿಸುವ ಅಗತ್ಯವೇನಿತ್ತು? ಯಾವುದೇ ಸಮಿತಿ ರಚನೆಯಾದಾಗ ಅದು ಸಾರ್ವಜನಿಕರ ಅಭಿಪ್ರಾಯ ಪಡೆದು ಅದರ ಆಧಾರದಲ್ಲಿ ವರದಿ ನೀಡಬೇಕು. ಆದರೆ ಈ ಸಮಿತಿ ತರಾತುರಿಯಲ್ಲಿ ವರದಿ ನೀಡಿದೆ. ಇಂಥ ತುರ್ತು ಬೇಕಿರಲಿಲ್ಲ.

-ಈ.ಬಸವರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT