ADVERTISEMENT

ಅಪರೂಪದ ವ್ಯಕ್ತಿಗೆ ಅಪರೂಪದ ಗೌರವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಅಕ್ಟೋಬರ್ 2020, 19:31 IST
Last Updated 11 ಅಕ್ಟೋಬರ್ 2020, 19:31 IST

ಅನಾಥ ಶವಗಳಿಗೆ ಮುಕ್ತಿ ದೊರಕಿಸುವ ಮೈಸೂರಿನ ಆಯೂಬ್ ಅಹ್ಮದ್ ಅವರನ್ನು ಈ ಬಾರಿಯ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸನ್ಮಾನಿಸಲು ನಿರ್ಧರಿಸಿರುವುದು (ಪ್ರ.ವಾ., ಅ. 11) ವಿಶೇಷ
ಸುದ್ದಿ ಅನ್ನಿಸಿತು. ನಿಜಕ್ಕೂ ಈ ವ್ಯಕ್ತಿ ಮಾಡುತ್ತಿರುವ ಕಾರ್ಯಕ್ಕೆ ಎಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಸನ್ಮಾನಿಸಿದರೂ ಕಡಿಮೆಯೇ. ದಿಕ್ಕಿಲ್ಲದ ಶವಗಳಿಗೆ, ಕೊರೊನಾದಿಂದ ಮೃತಪಟ್ಟ, ಸಂಬಂಧಿಕರೂ ಮುಟ್ಟದ ನೂರಕ್ಕೂ ಹೆಚ್ಚು ದೇಹಗಳಿಗೆ ಮುಕ್ತಿ ಮಾರ್ಗ ಕಾಣಿಸಲು ಜಿಲ್ಲಾಡಳಿತಕ್ಕೆ ನೆರವಾಗಿರುವ ಇಂತಹ ಅಪರೂಪದ ವ್ಯಕ್ತಿಯನ್ನು ಅಪರೂಪದ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸುವ ಸರ್ಕಾರದ ಮಾನವೀಯ ನಡೆ ಶ್ಲಾಘನೀಯ.

- ಆರ್.ಟಿ.ವೆಂಕಟೇಶ್ ಬಾಬು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT