ADVERTISEMENT

ನಾಚಿಕೆಗೇಡಿನ ಸಂಗತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಅಕ್ಟೋಬರ್ 2020, 19:31 IST
Last Updated 14 ಅಕ್ಟೋಬರ್ 2020, 19:31 IST

ತಮಿಳುನಾಡಿನ ಕಡಲೂರು ಸಮೀಪದ ಗ್ರಾಮವೊಂದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕೆ ಅವರನ್ನು ನೆಲದ ಮೇಲೆ ಕೂರಿಸಿ ಸಭೆ ನಡೆಸಲಾಗಿದೆ. ಇದು ಇಡೀ ದೇಶವೇ ತಲೆ ತಗ್ಗಿಸುವಂತಹ ನಾಚಿಕೆಗೇಡಿನ ವಿಚಾರ. ದೇಶ ಎಷ್ಟೇ ಮುಂದುವರಿದು, ಸಾಕ್ಷರತೆಯನ್ನು ಸಾಧಿಸಿದರೂ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡದೇ ಇರದು. ಇಂತಹ ವಿದ್ಯಮಾನಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಇವುಗಳಿಗೆ ಅಂತ್ಯ ಇಲ್ಲವೇ?

- ಶಾಂತಪ್ಪಾ ಎಸ್. ಭಾವಿಕಟ್ಟಿ, ರೇವೂರ ಬಿ., ಅಫಜಲಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT