ಶಾಲಾ ಪಠ್ಯಪುಸ್ತಕದಲ್ಲಿನ ದೋಷಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹಿಂಸೆಯನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿರುವುದು (ಪ್ರ.ವಾ., ಅ. 9) ಖಂಡನಾರ್ಹ. ಇಷ್ಟು ದಿನಗಳವರೆಗೆ ಕಾಣಿಸದೇ ಇರುವ ದೋಷಗಳು ಸಚಿವರಾಗಿ ಕೇವಲ ಒಂದು ತಿಂಗಳಲ್ಲಿ ಕಾಣಿಸಿದ್ದು ಪಕ್ಷನಿಷ್ಠೆಯ ಅತಿರೇಕವೆನಿಸುತ್ತದೆ. ಪಠ್ಯ ರಚನೆಯಲ್ಲಿ ದೋಷಗಳಿರುವುದು ಸಹಜ. ಅವುಗಳನ್ನು ಸರಿಪಡಿಸಲು ಹೊಸ ಪಠ್ಯಪುಸ್ತಕಗಳು ಬರುವವರೆಗೆ ಕಾಯಬೇಕಾಗಿತ್ತು.
ಜೊತೆಗೆ, ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಸಚಿವರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೆ ಸಾಕಾಗಿತ್ತು. ಆದರೆ ಸಚಿವರು ತಮ್ಮ ಮಾತನ್ನು ಹಿಂಪಡೆಯುವಂತೆ ಆಗ್ರಹಿಸಿದುದನ್ನು ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ವಿಚಾರವಾದಿಗಳು ಬೆಂಬಲಿಸಿ, ಬರಗೂರರು ಪ್ರಶ್ನಾತೀತರು ಎಂಬಂತೆ ಬಿಂಬಿಸುವುದು
ಅತಿರೇಕವೆನಿಸುತ್ತದೆ.
- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.