ಫೋನಿ ಚಂಡಮಾರುತವನ್ನು ಒಡಿಶಾ ಸರ್ಕಾರ ನಿಭಾಯಿಸಿದ ರೀತಿ ಮೆಚ್ಚುಗೆಗೆ ಅರ್ಹ.
ಆಡಳಿತ ವ್ಯವಸ್ಥೆಯು ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಮತ್ತು ಕರ್ತವ್ಯಪ್ರಜ್ಞೆಯಿಂದ ನಡೆದುಕೊಂಡರೆ ಹಾನಿಯ ಪ್ರಮಾಣವನ್ನು ಕನಿಷ್ಠ ಗೊಳಿಸಬಹುದು ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಕಲಿಯಲು ಪಾಠಗಳಿವೆ. ಅನುಸರಿಸಲು ಮಾದರಿಗಳಿವೆ. ಅದನ್ನು ಅಳವಡಿಸಿಕೊಳ್ಳುವ ವಿವೇಕ ಆಳುವ ವರ್ಗಕ್ಕೆ ಇರಬೇಕು.
-ಅನುರಾಧಾ ವಿ.,ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.