ADVERTISEMENT

ಅವರಂತೆಯೇ ಇವರೂ

ಎಚ್.ಆನಂದರಾಮ ಶಾಸ್ತ್ರೀ
Published 1 ಫೆಬ್ರುವರಿ 2019, 18:59 IST
Last Updated 1 ಫೆಬ್ರುವರಿ 2019, 18:59 IST

‘ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಕಾಸ ಹೊಂದಿಬಿಟ್ಟಿದೆ; ಇನ್ನಷ್ಟು ವಿಕಾಸ ಹೊಂದುವಂತೆ ಮಾಡುತ್ತೇವೆ.

ಅದಕ್ಕಾಗಿ ಇಗೋ ತಗೊಳ್ಳಿ ಒಂದಷ್ಟು ಹಣ, ವಿನಾಯಿತಿ, ಜನಪ್ರಿಯ ಯೋಜನೆ’– ಇದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಮಾಡಿದ ಬಜೆಟ್ ಭಾಷಣದ ಸಾರಾಂಶ. ತಾನು ವಿಭಿನ್ನ ಮತ್ತು ವಿಶಿಷ್ಟ ಎಂದು ತೋರಿಸಿಕೊಳ್ಳುವ ಮೋದಿ ನೇತೃತ್ವದ ಸರ್ಕಾರವೂ ಇತರೆಲ್ಲ ಸರ್ಕಾರಗಳಂತೆಯೇ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು ಬಜೆಟ್ ರೂಪಿಸಿರುವುದು ನಿಚ್ಚಳ.

ಇಷ್ಟಕ್ಕೂ ಈ ಬಜೆಟ್ಟಿನ ಪ್ರಸ್ತಾವಗಳನ್ನು ಜಾರಿಗೆ ತರಲು ಈಗಿನ ಸರ್ಕಾರಕ್ಕೆ ಸಾಧ್ಯವೇ? ಮುಂದೆ ಬೇರೆ ಪಕ್ಷದ ಸರ್ಕಾರ ಬಂದರೆ ಇದೇ ಬಜೆಟ್‌ ಅಂಶಗಳನ್ನು ಪಾಲಿಸುತ್ತದೆಯೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.