ADVERTISEMENT

ಸುರಕ್ಷೆಗೆ ಸಿಗಲಿ ಇನ್ನಷ್ಟು ಒತ್ತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:55 IST
Last Updated 4 ಮಾರ್ಚ್ 2020, 19:55 IST

ರೈಲು ಬೋಗಿಗಳಲ್ಲಿ ಸುರಕ್ಷೆಗೆ ಸಂಬಂಧಿಸಿದ ಕ್ರಮಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇತ್ತೀಚೆಗೆ ನಾನು ತಿರುಪತಿಯಿಂದ ಹೈದರಾಬಾದ್‌ಗೆ ರೈಲಿನಲ್ಲಿ ಪ್ರಯಾಣ ಮಾಡಿದೆ. ಸಿಕಿಂದರಾಬಾದ್‌ನಲ್ಲಿ ಎಲ್ಲಾ ಪ್ರಯಾಣಿಕರು ಇಳಿದರು. ನಮ್ಮ ಬೋಗಿಯಲ್ಲಿ ನಾನು, ನನ್ನ ವಯಸ್ಸಾದ ಅಮ್ಮ ಮತ್ತು ನನ್ನ ಚಿಕ್ಕ ಮಗ ಇಷ್ಟೇ ಜನ ಇದ್ದೆವು. ಭದ್ರತಾ ಸಿಬ್ಬಂದಿ ಯಾರೂ ಕಾಣಿಸಲಿಲ್ಲ.

ತುಂಬಾ ಭಯವಾಯಿತು.ಯಾರಾದರೂ ಇರಬಹುದೇನೋ ಎಂದು ಅಕ್ಕಪಕ್ಕದ ಮೂರು–ನಾಲ್ಕು ಬೋಗಿಗಳಲ್ಲಿ ಹುಡುಕಿದೆ. ಒಂದು ಬೋಗಿಯಲ್ಲಿ ಪುರುಷರೊಬ್ಬರು ಕುಳಿತಿದ್ದರು. ಮತ್ತೆ ಯಾರು ಇರಲಿಲ್ಲ. ನಾವೂ ಅವರೊಟ್ಟಿಗೆ ಕುಳಿತು ಹೈದರಾಬಾದ್‌ವರೆಗೆ ಪ್ರಯಾಣಿಸಿದೆವು. ಅಂತಹ ಸಂದರ್ಭದಲ್ಲಿ ಒಂದಿಬ್ಬರು ಭದ್ರತಾ ಸಿಬ್ಬಂದಿ ಇದ್ದರೆ ಧೈರ್ಯ ಮೂಡುತ್ತದೆ.
-ಗೀತಾ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT