ADVERTISEMENT

ವಾಚಕರ ವಾಣಿ | ಮತ್ತೆ ಮತ್ತೆ ಓದಿದೆವು, ಭಾವುಕರಾದೆವು...

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 19:30 IST
Last Updated 30 ಜುಲೈ 2020, 19:30 IST

ವಿಶ್ವ ಗೆಳೆಯರ ದಿನದ ಪ್ರಯುಕ್ತ ಪ್ರಕಟವಾದ ಸತೀಶ್ ತೀರ್ಥಹಳ್ಳಿ ಅವರ ಲೇಖನ (ಪ್ರ.ವಾ. ಜುಲೈ 28) ಮನಮೋಹಕ ಭಾವಗುಚ್ಛದಂತಿತ್ತು. ನಾವೆಲ್ಲಾ ಗೆಳೆಯ, ಗೆಳತಿಯರು ಮತ್ತೆ ಮತ್ತೆ ಓದಿ ಭಾವುಕರಾದೆವು. ಬದುಕಿನ ನೈಜ ಮೌಲ್ಯವಾದ ಪ್ರೀತಿ- ಗೆಳೆತನಕ್ಕಿಂತ ದೊಡ್ಡ ಸಂಪತ್ತು ಮತ್ತೇನಿರಲು ಸಾಧ್ಯ?

ಲೇಖನದ ಒಂದೊಂದು ಸಾಲಿನಲ್ಲೂ ಅಭಿವ್ಯಕ್ತಗೊಂಡ ಪದವಿನ್ಯಾಸ, ಕಾವ್ಯಾತ್ಮಕತೆ, ಆರ್ದ್ರತೆಯು ಜೀವನಪ್ರೀತಿಯನ್ನು ಉಕ್ಕಿಸುವಂತಿದ್ದವು. ನಶಿಸಿ ಹೋಗುತ್ತಿರುವ ಮನುಷ್ಯ ಸಂಬಂಧವನ್ನು ಮರುಸ್ಥಾಪಿಸಲು ಇಂತಹ ಲೇಖನಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು.

-ಪ್ರಿಯದರ್ಶಿನಿ, ಸುಮನಾ ವಶಿಷ್ಟ, ನಾದ ಕೆ.ಆರ್.,ಕೂಡಿಗೆ, ಸೋಮವಾರಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.