ಕೆಆರ್ಎಸ್ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರೋಧಿಸಿ ಕೆಲ ಸಂಘಟನೆಗಳು ಬುಧವಾರ ಮಂಡ್ಯ ಬಂದ್ಗೆ ಕರೆ ಕೊಟ್ಟಿದ್ದವು. ಮಂಡ್ಯ ರೈತರ ಜೀವನಾಡಿಯಾದ ಕೆಆರ್ಎಸ್ ಅಣೆಕಟ್ಟೆಯ ಉಳಿವಿಗೆ ಇಲ್ಲಿನವರು ಹೋರಾಟ ಮಾಡದೆ ಮತ್ಯಾರು ಮಾಡುತ್ತಾರೆ? ಆದರೆ, ವ್ಯಾಪಾರ– ವಹಿವಾಟು ತೆವಳುತ್ತಾ ಸಾಗಿರುವ ಈ ದಿನಗಳಲ್ಲಿ ‘ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ಬಂದ್ನ ದಾರಿ ಹಿಡಿಯುವುದು ಬೇಸರದ ಸಂಗತಿ. ಪ್ರತಿಭಟನೆಗೆ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಯೋಚನೆ ಮಾಡಬಹುದಿತ್ತು.
ಮಂಜುನಾಥ್,ಮಂಡ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.